Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday 25 June 2023

6ನೇ ತರಗತಿ ಸಮಾಜ ವಿಜ್ಞಾನ ಘಟಕ-03 ಕುಷಾಣರು ಸಂಪೂರ್ಣ ನೋಟ್ಸ್

6ನೇ ತರಗತಿ ಸಮಾಜ ವಿಜ್ಞಾನ ಘಟಕ-03 ಕುಷಾಣರು ಸಂಪೂರ್ಣ ನೋಟ್ಸ್

6ನೇ ತರಗತಿ ಸಮಾಜ ವಿಜ್ಞಾನ ಘಟಕ-03 ಕುಷಾಣರು ಸಂಪೂರ್ಣ ನೋಟ್ಸ್, 6th Social Science Kushana Dinasty Notes 2023, 6th Social Science Notes for All Exams,


6ನೇ ತರಗತಿ ಸಮಾಜ ವಿಜ್ಞಾನ ಘಟಕ-03 ಕುಷಾಣರು ಸಂಪೂರ್ಣ ನೋಟ್ಸ್

  • 2000 ವರ್ಷಗಳ ಹಿಂದೆ ಗಾಂಧಾರ (ಈಗಿನ ಅಫಘಾನಿಸ್ತಾನ) ಪ್ರದೇಶದಲ್ಲಿ ಕುಷಾಣ ಎಂಬ ರಾಜವಂಶವು ಆಳ್ವಿಕೆ ನಡೆಸುತ್ತಿತ್ತು.
  • ಕುಷಾಣರ ರಾಜಧಾನಿ – ಪುರುಷಪುರ (ಪೇಶಾವರ)
  • ಕುಷಾಣರ ಪ್ರಸಿದ್ಧ ಅರಸ ಕನಿಷ್ಕ
  • ಕನಿಷ್ಕನು ಬೌದ್ಧಮತ ಅನುಯಾಯಿ ಆಗಿದ್ದನು.
  • ಕಾಶ್ಮೀರದಲ್ಲಿ ಬೌದ್ಧ ಮಹಾಸಭೆಯನ್ನು ನಡೆಸಿದನು.
  • ಕನಿಷ್ಕನು ಅನೇಕ ಸ್ತೂಪಗಳನ್ನು ನಿರ್ಮಿಸಿದನು.
  • ಪುರುಷಪುರ (ಪೇಶಾವರ) ದಲ್ಲಿ ಕಟ್ಟಿಸಿದ ಸ್ತೂಪಕ್ಕೆ 13 ಅಂತಸ್ತುಗಳ ಗೋಪುರ ಮತ್ತು 400 ಅಡಿ ಎತ್ತರವಿತ್ತು.
  • ಕನಿಷ್ಕನ ಕಾಲಾವಧಿಯಲ್ಲಿ ಗಾಂಧಾರ & ಮಥುರಾ ಎಂಬ ಹೊಸ ಶೈಲಿಗಳು ಹುಟ್ಟಿಕೊಂಡವು.
  • ಮಥುರೆಯಲ್ಲಿ ಕನಿಷ್ಕನ ಕಲ್ಲಿನ ವಿಗ್ರಹ ದೊರಕಿದೆ.
  • ಕನಿಷ್ಕನ ಆಸ್ಥಾನದಲ್ಲಿ ಸಾಹಿತ್ಯ ರತ್ನ ಎಂದು ಬಿರುದಾಂಕಿತನಾದ ಅಶ್ವಘೋಷ ಪ್ರಮುಖನು.
  • ಅಶ್ವಘೋಷನು ಬುದ್ಧಚರಿತ ಎಂಬ ಸಂಸ್ಕೃತ ಕೃತಿಯನ್ನು ರಚಿಸಿದ್ದಾನೆ.
  • ನಾಗಾರ್ಜುನ (ಭಾರತದ ಐನಸ್ಟೀನ್) ಎಂಬ ಶ್ರೇಷ್ಠ ತತ್ವಜ್ಞಾನಿ ಹಾಗೂ ವಿಜ್ಞಾನಿ ಇದ್ದನು.
  • ವಸುಮಿತ್ರ ಎಂಬ ವಿದ್ವಾಂಸನು ಇದ್ದನು. ಈತ ಬೌದ್ಧ ಮಹಾಸಭೆಯ ಅಧ್ಯಕ್ಷನಾಗಿದ್ದನು.
  • ಚರಕ ಎಂಬುವವನು ಕನಿಷ್ಕನ ವೈದ್ಯನಾಗಿದ್ದನು. (ಪಿಎಸ್ಐ)
  • ಚರಕನು ‘ಚರಕ ಸಂಹಿತೆ’ ಎಂಬ ಆಯುರ್ವೇದ ಗ್ರಂಥವನ್ನು ರಚಿಸಿದ್ದಾನೆ.
  • ಆಯುರ್ವೇದವು ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾಗಿದೆ.


6ನೇ ತರಗತಿ ಸಮಾಜ ವಿಜ್ಞಾನ ಘಟಕ-03 ಕುಷಾಣರು: ಹೆಚ್ಚುವರಿ ಮಾಹಿತಿ:

  • ಕುಷಾಣರು ಯೂಚಿ ಪಂಗಡಕ್ಕೆ ಸೇರಿದವರು.
  • ಯೂಚಿ ಜನಾಂಗ ಮಧ್ಯ ಏಷ್ಯಾದಿಂದ ವಲಸೆ ಬಂದ ಅಲೆಮಾರಿ ಜನಾಂಗ.
  • ಮಧ್ಯ ಏಷ್ಯಾದಲ್ಲಿ ಕುಷಾಣರನ್ನು ಕಿ-ಷಾಂಗ್ ಎಂಬ ಹೆಸರಿನಿಂದ ಕರೆಯುತ್ತಿದ್ದರು.
  • ಕುಷಾಣರು ಶಕ ಪಾರ್ಥಿಯನ್ನರನ್ನು ಸೋಲಿಸಿ ಗಾಂಧಾರ ಪ್ರದೇಶದಲ್ಲಿ ನೆಲೆಸಿದ್ದರು.
  • ಕುಷಾಣ ಸಂತತಿಯ ಮೊದಲ ದೊರೆ – ಕುಜುಲ ಕಡ್ ಫೀಸಸ್ (1 ನೇ ಕಡ್ ಫೀಸಸ್, ಕುಸುಲಕ)
  • ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ ಮೊದಲ ಕುಷಾಣ ದೊರೆ- ವೀಮ ಕಡ್ ಫೀಸಸ್ (2ನೇ ಕಡ್ ಫೀಸಸ್)
  • ಕುಷಾಣ ಅರಸರನ್ನು ‘ದೇವಪುತ್ರರು’ ಎಂದು ಕರೆಯಲಾಗುತ್ತದೆ.
  • ಕನಿಷ್ಕನ ರಾಜಧಾನಿಯಾಗಿದ್ದ ನಗರ – ಪುರುಷಪುರ (ಪೇಶಾವರ)
  • ಕನಿಷ್ಕನ ಆಳ್ವಿಕೆಯ ಬಗ್ಗೆ ತಿಳಿಸುವ ಶಾಸನ – ಸಾರಾನಾಥ ಶಾಸನ
  • ಭಾರತಕ್ಕೆ ಪ್ರಥಮ ಬಾರಿಗೆ ಬೂಟುಗಳನ್ನು ಹಾಕಿಕೊಂಡು ಬಂದ ಮೊದಲ ವ್ಯಕ್ತಿ - ಕನಿಷ್ಕ
  • ಕನಿಷ್ಕನು ಕಾಶ್ಮೀರದ ಕುಂಡಲವನದಲ್ಲಿ ಅಶ್ವಘೋಷ & ವಸುಮಿತ್ರ ಅವರ ನೇತೃತ್ವದಲ್ಲಿ 4ನೇ ಬೌದ್ಧ ಸಮ್ಮೇಳನವನ್ನು ನಡೆಸಿದನು.
  • ಅಶೋಕ ನಂತರ ಬೌದ್ಧಧರ್ಮಕ್ಕೆ ಅತಿ ಹೆಚ್ಚು ಪ್ರೋತ್ಸಾಹ ನೀಡಿದ್ದ ಕುಷಾಣರ ಪ್ರಸಿದ್ಧ ಅರಸನಾದ ಕನಿಷ್ಕನನ್ನು ಎರಡನೇ ಅಶೋಕ ಎಂದು ಕರೆಯಲಾಗುತ್ತದೆ.
  • ಕನಿಷ್ಕನು ನಾಣ್ಯಗಳ ಮೇಲೆ ಬುದ್ಧನ ಚಿತ್ರಗಳನ್ನು ಟಂಕಿಸಿದನು.
  • ಬೌದ್ಧಧರ್ಮದ ರಕ್ಷಣೆಗಾಗಿ ಕನಿಷ್ಕನು ಮಹಾಕ್ಷತ್ರಪರು ಎಂಬ ಅಧಿಕಾರಿಗಳನ್ನು ನೇಮಿಸಿದ್ದನು.
  • ಶಕ ವರ್ಷ ಆರಂಭವಾಗಿದ್ದು – ಕ್ರಿ.ಶ 78 ರಲ್ಲಿ (ಕನಿಷ್ಕ ಪಟ್ಟಕ್ಕೆ ಬಂದ ವರ್ಷ)
  • ಶಕ ವರ್ಷವನ್ನೇ ಆಧಾರವಾಗಿಟ್ಟುಕೊಂಡು 21, 22 ಮಾರ್ಚ್ 1957 ರಂದು ನಮ್ಮ ರಾಷ್ಟ್ರೀಯ ಪಂಚಾಂಗವನ್ನು ಅಳವಡಿಸಿಕೊಳ್ಳಲಾಗಿದೆ.
  • ಕುಷಾಣರ ಕಾಲದಲ್ಲಿ ಪ್ರಚುರಗೊಂಡ ಕಲಾಶೈಲಿ – ಗಾಂಧಾರ (ಇಂಡೋ+ಗ್ರೀಕ್ ಶೈಲಿ)
  • ಕನಿಷ್ಕನು ಕನಿಷ್ಕಪುರ ಎಂಬ ನಗರವನ್ನು ಕಟ್ಟಿಸಿದನು.
  • ಕನಿಷ್ಕನ ಆಸ್ಥಾನದಲ್ಲಿದ್ದ ಗಾಂಧಾರ ಕಲೆಯ ಪ್ರಸಿದ್ಧ ಗ್ರೀಕ್ ಶಿಲ್ಪಿ – ಏಜಿಸಿಲಾನ್ (ಅಜಶಿಲ)
  • ರೋಮ್ ದೇಶಕ್ಕೆ ರಫ್ತಾಗುತ್ತಿದ್ದ ಭಾರತದ ಸರಕುಗಳು – ಹತ್ತಿ ಬಟ್ಟೆ, ರೇಷ್ಮೆ, ವಜ್ರ, ಸಾಂಬಾರ ಪದಾರ್ಥಗಳು
  • ರೋಮನ್ ಸಂಪತ್ತು ಭಾರತಕ್ಕೆ ಪ್ರವಾಹದ ರೂಪದಲ್ಲಿ ಹರಿಯುತ್ತಿದೆ ಎಂದ ವಿದ್ವಾಂಸ – ಪ್ಲೀನಿ.
  • ಅಶ್ವಘೋಷನ ಬುದ್ಧ ಚರಿತೆಯನ್ನು ಕನ್ನಡದಕ್ಕೆ ಅನುವಾದಿಸಿದ ಸಾಹಿತಿ – ಎಲ್. ಬಸವರಾಜು
  • ಅಶ್ವಘೋಷನ ಇತರ ಕೃತಿಗಳು: ವಜ್ರಸೂಚಿ, ನಾದ್ರಾನಂದ, ಸೂತ್ರಾಲಂಕಾರ.
  • ಬೌದ್ಧ ಧರ್ಮದ ವಿಶ್ವಕೋಶ ಎಂದೇ ಪ್ರಸಿದ್ಧಿ ಪಡೆದ ಮಹಾಭಾಷ್ಯ ಕೃತಿಯನ್ನು ವಸುಮಿತ್ರ ರಚಿಸಿದ್ದಾನೆ.
  • ಕುಷಾಣರ ಕಾಲಾವಧಿಯಲ್ಲಿದ್ದ ಸುಶ್ರತನು ‘ಸುಶ್ರುತ ಸಂಹಿತೆ’ ಎಂಬ ಕೃತಿ ರಚಿಸಿದ್ದು, ಇದು ಪ್ಲಾಸ್ಟಿಕ್ ಸರ್ಜರಿಯ ಕುರಿತು ತಿಳಿಸುತ್ತದೆ.
  • ಕನಿಷ್ಕನ ಆಳ್ವಿಕೆಯ ಕಾಲವನ್ನು ಸಂಸ್ಕೃತ ಸಾಹಿತ್ಯದ ಮುನ್ನಡೆ ಎನ್ನುವರು.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads