Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday 6 May 2023

6 ನೇ ತರಗತಿಯ ಅಧ್ಯಾಯ-01 ನಮ್ಮ ಹೆಮ್ಮೆಯ ಭಾರತ ನೋಟ್ಸ್

6 ನೇ ತರಗತಿಯ ಅಧ್ಯಾಯ-01

ನಮ್ಮ ಹೆಮ್ಮೆಯ ಭಾರತ ನೋಟ್ಸ್

6 ನೇ ತರಗತಿಯ ಅಧ್ಯಾಯ-01 ನಮ್ಮ ಹೆಮ್ಮೆಯ ಭಾರತ ನೋಟ್ಸ್, Namma Hemmeye Bharata Sampporna Notes For All Competitive Exams


  • ಭಾರತದ ಪ್ರಾಚೀನ ಹೆಸರುಗಳು: ಭರತ ಖಂಡ, ಹಿಂದೂಸ್ತಾನ, ಇಂಡಿಯಾ, ಜಂಬೂದ್ವೀಪ
  • ಪುರಾಣಗಳ ಪ್ರಕಾರ: ವೃಷಭನಾಥನ ಹಿರಿಯ ಮಗನಾದ ಭರತ ರಾಜನು ಈ ನಾಡನ್ನು ಆಳಿದ್ದರಿಂದಾಗಿ ಭರತಖಂಡ, ಭರತವರ್ಷ (ಭಾರತ ದೇಶ) ಎಂಬ ಹೆಸರು ಬಂದಿದೆ.
  • ಪರ್ಷಿಯನ್ನರು ಸಿಂಧೂ ನದಿ ಬಯಲಿನ ಜನರನ್ನು ಹಿಂದೂ ಎಂದು ಕರೆದರು.
  • ಗ್ರೀಕರು ಹಿಂದೂ ಪದವನ್ನು ಇಂಡು ಎಂದು ಉಚ್ಛರಿಸಿದರು, ಹಾಗೂ ಸಿಂಧು ನದಿಯನ್ನು ಇಂಡಸ್ ಎಂದು ಕರೆದರು.
  • ಮಹಮ್ಮದಿಯರ ಆಕ್ರಮಣದಿಂದ ಮತ್ತೆ ಹಿಂದೂ ಪದ ಮತ್ತೆ ಬಳಕೆಗೆ ಬಂದಿತು.
  • ಮಹಮ್ಮದಿಯರು ಈ ದೇಶವನ್ನು ಹಿಂದೂಸ್ತಾನ ಎಂದು ಕರೆದರು ಹಾಗೂ ಇಲ್ಲಿನ ಜನರನ್ನು ಹಿಂದುಗಳು ಎಂದು ಹಾಗೂ ಅವರ ಧರ್ಮವನ್ನು ಹಿಂದೂ ಧರ್ಮ ಎಂದು ಕರೆದರು.
  • ಇಂಗ್ಲೀಷರು ಈ ದೇಶವನ್ನು ಇಂಡಿಯಾ ಎಂದೂ ಹಾಗೂ ಹಿಂದೂ ಧರ್ಮವು ಹಿಂದೂಯಿಸಂ ಎಂದು ಕರೆದರು.
  • “ಸಂಸ್ಕೃತ ಭಾಷೆಯ ನುಡಿಗಟ್ಟು ಅದ್ಭುತ” ಎಂಬ ಹೇಳಿಕೆ ನೀಡಿದವರು- ವಿಲಿಯಂ ಜೋನ್ಸ್ 
  • ವಿಲಿಯಂ ಜೋನ್ಸ್ ಭಾರತದ ಸಾಹಿತ್ಯ ಅಧ್ಯಯನ ಮಾಡುವ ಸಲುವಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿದರು.
  • ವಿಲಿಯಂ ಜೋನ್ಸ್ ಸ್ಥಾಪಿಸಿದ ಸಂಸ್ಥೆಯು ಭಗವದ್ಗೀತೆಯನ್ನು ಇಂಗ್ಲೀಷ್ ಗೆ ಭಾಷಾಂತರಿಸಿತು, ಇದು ಸಂಸ್ಕೃತದಿಂದ ಇಂಗ್ಲೀಷ್ ಗೆ ತರ್ಜುಮೆಗೊಂಡ ಮೊದಲ ಕೃತಿಯಾಗಿದೆ.
  • ವಿಲಿಯಂ ಜೋನ್ಸ್ ಕಾಳಿದಾಸನ ಶಾಕುಂತಲ ಕೃತಿಯನ್ನು ಇಂಗ್ಲೀಷ್ ನಲ್ಲಿ ಸಿದ್ಧಗೊಳಿಸಿದನು.
  • ಇದೇ ಕಾಲದಲ್ಲಿ 50 ಉಪನಿಷತ್ತುಗಳು ಪರ್ಷಿಯನ್ ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದಗೊಂಡವು.
  • ಭಾರತ ಶಬ್ದದ ವಿವರಣೆ: ಭಾ- ಎಂದರೆ ಬೆಳಕು. ಜ್ಞಾನವೆಂಬ ಬೆಳಕಿನಲ್ಲಿ ‘ರತ’ (ಆಸಕ್ತ)ರಾಗಿರುವ ಭೂಮಿ (ದೇಶ) ‘ಭಾರತ’. ಆ ಪರಂಪರೆಯಲ್ಲಿರುವವರೇ ಭಾರತೀಯರು

ಭಾರತದ ಪ್ರಾಚೀನ ಹೆಸರುಗಳು ಮತ್ತು ಬದಲಾದ ಹೆಸರುಗಳು:

  • 1) ಮಗಧ-ಬಿಹಾರ
  • 2) ಕಳಿಂಗ-ಒರಿಸ್ಸಾ
  • 3) ಚೇರ-ಕೇರಳ
  • 4) ಇಂದ್ರಪ್ರಸ್ಥ-ದೆಹಲಿ
  • 5) ಪ್ರಯಾಗ-ಅಲಹಾಬಾದ್
  • 6) ಮದ್ರಾಸ್-ಚೆನ್ನೈ
  • 7) ಬರೋಡಾ-ವಡೋದರಾ
  • 8) ಬೊಂಬಾಯಿ-ಮುಂಬೈ
ಹೆಚ್ಚುವರಿ ಮಾಹಿತಿ- ಪ್ರಾಚೀನ ಹೆಸರುಗಳು ಮತ್ತು ಬದಲಾದ ಹೆಸರುಗಳು:
  • 1) ಮೆಸಪೊಟೇಮಿಯಾ-ಇರಾಕ್
  • 2) ಪರ್ಷಿಯಾ-ಇರಾನ್
  • 3) ವಾತಾಪಿ-ಬಾದಾಮಿ
  • 4) ಕಾಥವಪುರಿ-ಶ್ರವಣಬೆಳಗೊಳ
  • 5) ಸ್ಥಣ ಕುಂದೂರು-ತಾಳಗುಂದ
  • 6) ವೈಜಯಂತಿಪುರ (ವಿಜಯಪತಾಕೆಪುರ)-ಬನವಾಸಿ
  • 7) ಗೌಡದೇಶ-ಬಂಗಾಳ
  • 8) ಕಾಮರೂಪ-ಅಸ್ಸಾಂ
  • 9) ಭಾಗ್ಯನಗರ-ಹೈದರಾಬಾದ್
  • 10) ಕರ್ಣಾವತಿ ನಗರ-ಅಹಮದಾಬಾದ್
  • 11) ಕಾಥಿಯವಾಡ-ಗುಜರಾತ್
  • 12) ಬನಾರಸ್-ಕಾಶಿ
  • 13) ಮಹಿಷಮಂಡಲ-ಮೈಸೂರು
  • 14) ರಜಪುತಾನ-ರಾಜಸ್ಥಾನ
  • 15) ಸುವರ್ಣಗಿರಿ-ಕನಕಗಿರಿ (ರಾಯಚೂರು)
  • 16) ಇಸಿಲ-ಬ್ರಹ್ಮಗಿರಿ (ಚಿತ್ರದುರ್ಗ)
  • 17) ಅಹ್ ಸಾನಾಬಾದ್-ಕಲಬುರಗಿ
  • 18) ಆನೆಗೊಂದಿ-ವಿಜಯನಗರ
  • 19) ದ್ವಾರಸಮುದ್ರ-ಹಳೆಬೀಡು
  • 20) ವೇಣುಗ್ರಾಮ-ಬೆಳಗಾವಿ


ಮಹತ್ವದ ಮಾಹಿತಿ

  • ಶನ ಅಥವಾ ಸೊನ್ನೆಯನ್ನು ಮೊತ್ತಮೊದಲು ಒಂದು ಸಂಖ್ಯಾಸೂಚಕವಾಗಿ ಬಳಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ.
  • ಭೂಮಿ ಗುಂಡಗಿದೆ, ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ ಎಂದು ಭಾರತೀಯ ವಿಜ್ಞಾನಿ ಆರ್ಯಭಟನ ವಾದವನ್ನು ಎತ್ತಿಹಿಡಿದ ಕೀರ್ತಿ ಕೊಪರ್ನಿಕಸ್ ಗೆ ಸಲ್ಲುತ್ತದೆ.
  • ನಾವಿಕರಿಗಾಗಿ ಭಾರತೀಯರು ರೇಖಾಂಶ ನಕ್ಷೆಯನ್ನು ಉಜ್ಜಯಿನಿಯಲ್ಲಿ ಸಿದ್ಧಗೊಳಿಸಿದ್ದರು.
  • ಇಂತಹ ರೇಖಾಂಶ ನಕ್ಷೆಯೊಂದನ್ನು ಬಳಸಿಕೊಂಡು ಪೋರ್ಚುಗಲ್ ನಾವಿಕನಾದ ವಾಸ್ಕೋಡಿಗಾಮ ಭಾರತದ ಪಶ್ಚಿಮ ತೀರವನ್ನು ತಲುಪಿದನು.
  • ಪೈಥಾಗೊರಸ್ ನ ಪ್ರಖ್ಯಾತ ಪ್ರಮೇಯವನ್ನು ಆತನಿಗಿಂತ 2 ಶತಮಾನಗಳ ಮೊದಲೇ ಬೋಧಾಯನ ಎಂಬ ಭಾರತೀಯ ವಿಜ್ಞಾನಿ ಗುರುತಿಸಿದ್ದನು.
  • ವಸ್ತುವಿನ ಅವಿಭಾಜ್ಯ ಕಣವಾದ ಅಣುವನ್ನು ಕಣಾದ ಎಂಬ ಭಾರತೀಯ ವಿಜ್ಞಾನಿ 27 ಶತಮಾನಗಳಷ್ಟು ಹಿಂದೆ ಪ್ರತಿಪಾದಿಸಿದ್ದನು.
  • ರಷ್ಯಾದೇಶದಲ್ಲಿ ಅಣು ಸಿದ್ಧಾಂತಕ್ಕೆ ಸಂಬಂಧಿಸಿದ ಪಾಠವು ಕಣಾದನ ಸ್ಮರಣೆಯಿಂದ ಆರಂಭವಾಗುತ್ತದೆ.
  • ಗುಜರಾತಿನ ಸೂರತ್ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ನೌಕಾನಿರ್ಮಾಣ ಕೇಂದ್ರವೆಂದು ಪ್ರಸಿದ್ಧವಾಗಿತ್ತು.
  • ಜಗತ್ತಿನ ಅತಿ ಎತ್ತರದ ಬುದ್ಧನ ಮೂರ್ತಿ ಅಪ್ಘಾನಿಸ್ತಾನದ ಬಮಿಯಾನ್ ನಲ್ಲಿ ಇತ್ತು.
  • ಕಾಂಬೋಡಿಯಾದ ಅಂಗೋರವಾಟ್ ನಲ್ಲಿ ಭವ್ಯ ಹಿಂದೂ ದೇವಾಲಯವು ಜಗತ್ತಿನ ಶ್ರೇಷ್ಟ ವಾಸ್ತುಶಿಲ್ಪಗಳಲ್ಲೊಂದಾಗಿದೆ.
  • ಜಾವಾದ ಬೊರಬೊದೂರ್ ಎಂಬಲ್ಲಿ ಜಗತ್ಪ್ರಿಸಿದ್ಧ ಬೃಹತ್ ಬೌದ್ಧದೇವಾಲಯವಿದೆ.
  • ಇವೆರಡೂ ವಿಶ್ವಪರಂಪರೆಗೆ ಸೇರಿದ ತಾಣಗಳಾಗಿವೆ.
  • ವೃಷಭನಾಥ ಜೈನಮತದ ಮೊದಲ ತೀರ್ಥಂಕರ.
  • ಜೈನಧರ್ಮದ 23 ನೇ ತೀರ್ಥಂಕರ – ಪಾರ್ಶ್ವನಾಥ
  • ಜೈನಧರ್ಮದ 24 ನೇ ತೀರ್ಥಂಕರ – ಮಹಾವೀರ
  • ಜೈನಧರ್ಮದ ಸ್ಥಾಪಕ – ಮಹಾವೀರ
  • ಮಹಾವೀರನು ಕ್ರಿ.ಪೂ 599 ಅಥವಾ 540 ರಲ್ಲಿ ಪಾಟ್ನಾ ಸಮೀಪದ ಕುಂಡಲಿವನ ಅಥವಾ ಕುಂದಗ್ರಾಮದಲ್ಲಿ ಜನಿಸಿದನು.
  • ಮಹಾವೀರನ ತಂದೆ-ಸಿದ್ಧಾರ್ಥ, ತಾಯಿ-ತ್ರಿಶಲಾದೇವಿ, ಹೆಂಡತಿ-ಯಶೋಧರೆ.
  • ಮಹಾವೀರನ ಮೊದಲ ಹೆಸರು- ವರ್ಧಮಾನ
  • ಮಹಾವೀರನ ಹೆಣ್ಣುಮಗುವಿನ ಹೆಸರು- ಅನೊಜ್ಜ ಅಥವಾ ಪ್ರಿಯದರ್ಶಿನಿ
  • ಮಹಾವೀರ ಕೈವಲ್ಯ ಜ್ಞಾನ ಪಡೆದ ಗ್ರಾಮ- ಜ್ರುಂಬಕ.
  • ಮಹಾವೀರ ಬಿಹಾರದ ಪಾವಾಪುರಿ ಎಂಬಲ್ಲಿ ಕ್ರಿ.ಪೂ 527 ರಲ್ಲಿ ನಿರ್ವಾಣ ಹೊಂದಿದರು.
  • ಜಿನ ಎಂದರೆ ಇಂದ್ರಿಯಗಳನ್ನು ಪೂರ್ಣ ನಿಗ್ರಹಿಸಿದವನು ಅಥವಾ ಜಯಿಸಿದವನು.
  • ಕೇವಲಿನ್ ಎಂದರೆ- ಮಹಾಜ್ಞಾನಿ ಎಂದರ್ಥ
  • ತೀರ್ಥಂಕರ ಎಂದರೆ – ಮಾರ್ಗದರ್ಶಕರು ಅಥವಾ ಭವ ಸಾಗರವನ್ನು ದಾಟಿಸಬಲ್ಲ ಧರ್ಮಗುರು ಎಂದರ್ಥ.
  • ಕುಂಡಲಿವನದ ಇಂದಿನ ಹೆಸರು- ಬಸುಕುಂದ
  • ಮಹಾವೀರನ ಪ್ರಥಮ ಗಮಧರ ಅಥವಾ ಶಿಷ್ಯ- ಇಂದ್ರಭೂತಿ
  • ಜೈನಧರ್ಮದ ಗ್ರಂಥಗಳು- ಪ್ರಾಕೃತ ಭಾಷೆಯಲ್ಲಿವೆ.
  • ಕರ್ನಾಟಕದ ಪ್ರಾಚೀನ ಜೈನ ಕೇಂದ್ರಗಳು- ಕೊಪ್ಪಳ ಹಾಗೂ ಶ್ರವಣಬೆಳಗೊಳ
  • ಕರ್ಮ ಸಿದ್ಧಾಂತದ ಪ್ರತಿಪಾದಕರು – ಮಹಾವೀರ
  • ವರ್ಧಮಾನರು ಸನ್ಯಾಸತ್ವ ಸ್ವೀಕರಿಸಿದ ಘಟನೆಯನ್ನು ಮಹಾಪರಿತ್ಯಾಗ ಎಂದು ಕರೆಯುವರು.
  • ಋಗ್ವೇದದಲ್ಲಿ ಯಾವ ತೀರ್ಥಂಕರನ ಉಲ್ಲೇಖವಿದೆ- ವೃಷಭನಾಥ.
  • ಮೊದಲ ಜೈನ ಸಮ್ಮೇಳನ ಕ್ರಿ.ಪೂ 3 ನೇ ಶತಮಾನದಲ್ಲಿ, ಸ್ಥೂಲಭದ್ರನ ಅಧ್ಯಕ್ಷತೆಯಲ್ಲಿ ಪಾಟಲೀಪುತ್ರದಲ್ಲಿ ಜರುಗಿತು.
  • ಗೊಮ್ಮಟೇಶ್ವರ ನಿರ್ಮಾತೃ – ಚಾವುಂಡರಾಯ
  • ಪ್ರಸಿದ್ಧ ಮೌಂಟ್ ಅಬು ದೇವಾಲಯದ ನಿರ್ಮಾತೃ – ಗುಜರಾತಿನ ರಾಜಕುಮಾರ ಕುಮಾರಪಾಲ
  • 1000 ಕಂಬಗಳಿರುವ ಬಸದಿ – ಮೂಡಬಿದ್ರೆಯಲ್ಲಿದೆ.
  • ಜೈನರ ಮೆಕ್ಕಾ – ಮೂಡಬಿದ್ರೆ
  • ಜೈನರ ಕಾಶಿ - ಶ್ರವಣಬೆಳಗೊಳ
  • ಮಯನ್ಮಾರ್-ಬ್ರಹ್ಮದೇಶ
  • ಇಂಡೋನೇಷ್ಯಾದ ಜಾವಾ, ಸುಮಾತ್ರಾ, ಬಾಲಿ – ಸುವರ್ಣದ್ವೀಪ
  • ವಿಯೆಟ್ನಾಂ – ಚಂಪಾ
  • ಕಾಂಬೋಡಿಯ – ಕಂಬುಜ ಎಂದು ಕರೆಯಲಾಗುತ್ತಿತ್ತು.

6 ನೇ ತರಗತಿಯ ಅಧ್ಯಾಯ-01 ನಮ್ಮ ಹೆಮ್ಮೆಯ ಭಾರತ ನೋಟ್ಸ್ ವಿಡಿಯೋ ತರಗತಿ:




No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads