Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Wednesday 11 January 2023

ಕಾಶ್ಮೀರದ ಕಾರ್ಕೋಟ ಸಾಮ್ರಾಜ್ಯ

 ಕಾಶ್ಮೀರದ ಕಾರ್ಕೋಟ ಸಾಮ್ರಾಜ್ಯ


ವಿಶ್ವವೇ ಬೆರಗಾಗುವಂತೆ ಆಡಳಿತವನ್ನು ನಡೆಸಿದ, ಮಾದರಿ ರಾಜ್ಯವನ್ನು ಕಟ್ಟಿದ ಮತ್ತು ಅಸಾಧ್ಯವಾದುದನ್ನು ಸಾಧಿಸಿದ ಭಾರತದ ರಾಜವಂಶಗಳಲ್ಲಿ ಕಾಶ್ಮೀರದ ಕಾರ್ಕೋಟ ವಂಶಸ್ಥರು ಒಬ್ಬರು. 625ರಲ್ಲಿ ರಾಜಾ ದುರ್ಲಭವರ್ಧನನಿಂದ ಸ್ಥಾಪಿತವಾದ ಕಾರ್ಕೋಟ ಮನೆತನ ಆ ಕಾಲದ ಭಾರತದ ಬಲಿಷ್ಠ ಸಂಸ್ಥಾನಗಳಲ್ಲಿ ಒಂದಾಗಿತ್ತು.

230 ವರ್ಷ (625 - 855) ಅಸ್ತಿತ್ವದಲ್ಲಿದ್ದ ಕಾರ್ಕೋಟ ಸಾಮ್ರಾಜ್ಯ ಹಿಮಾಲಯ ಮತ್ತು ಅದರ ತಪ್ಪಲಿನ ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನು ಬೀರಿದ್ದು ಮಾತ್ರವಲ್ಲದೆ ಮಧ್ಯ ಏಷ್ಯದವರೆಗೂ ವಿಸ್ತರಿಸಿತ್ತು. ಪಾರಸ್ಪೋರ್ ಅಥವಾ ಪರಿಹಾಸಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಕಾರ್ಕೋಟರು ಸೂರ್ಯೋಪಾಸಕರಾಗಿದ್ದರು. ಕಾಶ್ಮೀರದ ಗತವೈಭವವನ್ನು ಸಾರುವ ಹೆಸರಾಂತ ಮಾರ್ತಾಂಡ ಸೂರ್ಯ ದೇವಸ್ಥಾನ ಇವರ ಕೊಡುಗೆ.

ಲಲಿತಾದಿತ್ಯ:


ಕಾರ್ಕೋಟ ವಂಶದಲ್ಲಿ ಗಮನ ಸೆಳೆಯುವ ಮತ್ತು ಅತ್ಯಂತ ಪ್ರಭಾವಿ ರಾಜನಾಗಿದ್ದವನೆಂದರೆ 724ರಲ್ಲಿ ಪಟ್ಟಕ್ಕೆ ಬಂದ ಲಲಿತಾದಿತ್ಯ. ಆತನ 36 ವರ್ಷಗಳ ಆಳ್ವಿಕೆಯಲ್ಲಿ ಸಾಮ್ರಾಜ್ಯವು ಇಂದಿನ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರದವರೆಗೆ ಹಬ್ಬಿತ್ತು. ಈತನ ಕಾಲವನ್ನು ಕಾರ್ಕೋಟ ವಂಶದ ಚಿನ್ನದ ಯುಗ ಎನ್ನಬಹುದು. ಏಕೆಂದರೆ ಲಲಿತಾದಿತ್ಯನು ಕಲೆ, ಸಂಸ್ಕೃತಿಗಳಿಗೆ ಯಥೇಚ್ಛವಾದ ಪ್ರೋತ್ಸಾಹವನ್ನು ಕೊಟ್ಟನು.

ಶೈವಸಿದ್ಧಾಂತದ ವೈಭವದ ಕಾಲಘಟ್ಟ:

ಕಾಶ್ಮೀರದ ಶೈವಸಿದ್ಧಾಂತದ ಅತ್ಯಂತ ವೈಭವದ ಕಾಲಘಟ್ಟವೆಂದು ಕಾರ್ಕೋಟರ ಕಾಲವನ್ನು ಹೇಳಲಾಗುತ್ತದೆ. ವಸುಗುಪ್ತನ ಶೈವಸೂತ್ರ ಈ ಅವಧಿಯಲ್ಲಿ ರಚನೆಯಾಯಿತು. ಖ್ಯಾತ ತತ್ವಶಾಸ್ತ್ರಜ್ಞ, ಕವಿ ಅಭಿನವಗುಪ್ತ ಕಾರ್ಕೋಟಕರ ಕಾಲದವನಾಗಿದ್ದ. ಶೈವಸೂತ್ರಗಳ ತ್ರಿಕ ಮತ್ತು ಕೌಲ ಸಂಪ್ರದಾಯಗಳು ಈ ಅವಧಿಯಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿದವು. ಹೆಸರಾಂತ ಕವಿಯಾದ ಕಲ್ಹಣನು ಲಲಿತಾಧಿತ್ಯನ ಆಸ್ಥಾನದಲ್ಲಿದ್ದನು.

ಕಲ್ಹಣಪ್ರಮುಖ ಕೃತಿ ರಾಜತರಂಗಿಣಿ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads