Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday 2 July 2022

ಕಂಚಿಯ ಪಲ್ಲವರ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Kanchi Pallava Dynasty in Kannada

ಕಂಚಿಯ ಪಲ್ಲವರು ಸಂಪೂರ್ಣ ಮಾಹಿತಿ ಇಲ್ಲಿದೆ Complete History of The Kanchi Pallava Dynasty in Kannada

ಕಂಚಿಯ ಪಲ್ಲವರ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Kanchi Pallava Dynasty in Kannada

  • ಕ್ರಿ.ಶ.6 – 9 ನೇ ಶತಮಾನದವರೆಗೆ ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದ ಮನೆತನ - ಕಂಚಿಯ ಪಲ್ಲವರು 
  • ಕಂಚಿಯ ಪಲ್ಲವರು ಮೊದಲು - ಶಾತವಾಹನರ ಮಂಡಲಾಧಿಪತಿಗಳಾಗಿದ್ದರು.
  • ಶಾತವಾಹನರ ನಂತರ ದಕ್ಷಿಣದಲ್ಲಿ ಸ್ವತಂತ್ರರಾದ ಮನೆತನ - ಪಲ್ಲವರು.
  • ಕಂಚಿಯ ಪಲ್ಲವರ ಸ್ಥಾಪಕ ದೊರೆ - ಬಪ್ಪ.
  • ಬಪ್ಪನ ನಂತರ ಅಧಿಕಾರಕ್ಕೆ ಬಂದವರು - ವಿಷ್ಣುಗೋಪ.
  • ಪಲ್ಲವರ ರಾಜಧಾನಿ - ಕಂಚಿ.
  • ಪಲ್ಲವರ ಕಾಲದಲ್ಲಿ ಸ್ಥಾಪನೆಯಾದ ನಲಂದ ವಿ.ವಿ. ನಿಲಯಕ್ಕೆ ಸರಿಸಮಾನವಾದ ವಿ.ವಿ. ನಿಲಯ - ಕಂಚಿ ವಿಶ್ವ ವಿದ್ಯಾ ನಿಲಯ.

  • ಮತ್ತವಿಲಾಸ ಪ್ರಹಸನದ ಎಂಬ ಸಂಸ್ಕೃತ ನಾಟಕದ ಕರ್ತೃ - ಒಂದನೇ ಮಹೇಂದ್ರ ವರ್ಮನ್ .
  • “ ಭಾರವಿ ” ಕವಿಗೆ ಆಶ್ರಯ ನೀಡಿದ್ದ ಪಲ್ಲವ ದೊರೆ - ಸಿಂಹ ವಿಷ್ಣು .
  • “ ನ್ಯಾಯ ಭಾಷ” ಕೃತಿಯ ಕರ್ತೃ - ವಾತ್ಸಾಯನ .
  • ಪಲ್ಲವರ ಆಸ್ಥಾನದಲ್ಲಿದ್ದ ತ್ರಿವಳಿಗಳು - ಅಪ್ಪಾರ್ , ಸಂಬಂಧರ್ , ಸುಂದರರ್ .
  • “ ಧರ್ಮಪಾಲ ” ಈ ವಿ.ವಿ ನಿಲಯದ ಕುಲಪತಿಯಾಗಿದ್ದ - ನಲಂದಾ ವಿ.ವಿ. ನಿಲಯ .
  • “ ತಿರುವಾಚಗಂ ” ಕೃತಿಯ ಕರ್ತೃ - ಮಣಿಕೈ ವಸಗರ್ .
  • ಪಲ್ಲವರ ಕಾಲದಲ್ಲಿದ ಧಾರ್ಮಿಕ ಪಂಥಗಳು - ಭಾಗವ ಹಾಗೂ ಪಾಶುಪತ .
  • ಭಾಗವತ ಇದು - ವೈಷ್ಣವ ಪಂಥ .
  • ಕಂಚಿಯ ಪಲ್ಲವರ ಕಾಲದಲ್ಲಿ ಭಕ್ತಿ ಚಳವಳಿಯನ್ನು ಪ್ರಖ್ಯಾತಗೊಳಿಸಿದವರು - ನಯನಾರರು .
  • ತಿರುಮೂಲರ್ ಕೃತಿಯ ಕರ್ತೃ - ತಿರುಮಂದಿರಂ
  • ಪಲ್ಲವರ ಕಾಲದಲ್ಲಿ ಜನ್ಮತಾಳಿದ ಕಲೆ ಮತ್ತು ವಾಸ್ತುಶಿಲ್ವ ಶೈಲಿ - ದ್ರಾವಿಡ ಶೈಲಿ.
  • ಪಲ್ಲವರ ವಾಸ್ತುಶಿಲ್ಪದ ಭಾಗಗಳು - ಗುಹಾ ದೇವಾಲಯ ಹಾಗೂ ದೇವಾಲಯ.
  • ಗುಹಾದೇವಾಲಯದ ಎರಡು ಉಪ ವಿಭಾಗಗಳು - ಸ್ಥಂಭ ಮಂಟಪ ಹಾಗೂ ಏಕಶಿಲೆಯ ದೇವಾಲಯಗಳು .
  • ಸ್ಥಂಭ ಮಂಟಪದಲ್ಲಿದ್ದ ಮಹೇಂದ್ರ ಶೈಲಿಯ ಕರ್ತೃ - 1 ನೇ ಮಹೇಂದ್ರ ವರ್ .
  • ಏಕಶಿಲಾ ದೇವಾಲಯದ್ಲಿದ್ದ ನರಸಿಂಹ ವರ್ಮನ್ ಶೈಲಿಯ ಕರ್ತೃ - 1 ನೇ ನರಸಿಂಹ ವರ್ಮನ್.
  • ಪಲ್ಲವರ ಕಾಲದ ಏಕಶಿಲ ರಥಗಳು ಈ ಪ್ರದೇಶದಲ್ಲಿದೆ - ಮಾಮ್ಲ ಪುರ.
  • ಪಲ್ಲವರ ಕಾಲದ ಅತಿ ಉದ್ದವಾದ ಹಾಗೂ ಪೂರ್ಣಗೊಂಡ ರಥ ವಾಸ್ತು ಶಿಲ್ಪ - ಧರ್ಮರಾಜ ರಥ.
  • ರಾಜ ಸಿಂಹ ಶೈಲಿಯ ಕರ್ತೃ - ರಾಜ ನರಸಿಂಹನ್.

  • “ ದೇವಾಲಯಗಳ ನಗರ ಅಥವಾ ಗೋಪುರಗಳ ನಗರ ” ಎಂದು ಕರೆಯಲ್ಪಟ್ಟಿರುವ ಪ್ರದೇಶ - ಕಂಚಿ .
  • ತೀರದ ದೇವಾಲಯದ ನಿರ್ಮಾತೃ - 2 ನೇ ನರಸಿಂಹ .
  • ಕಂಚಿಯ ಕೈಲಾಸ ದೇವಾಲಯದ ಕರ್ತೃ - ರಾಜ ಸಿಂಹ ಪಲ್ಲವ .
  • ಕಂಚಿಯ ಕೈಲಾಸ ದೇವಾಲಯವನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ರಾಜ ಸಿಂಹೇಶ್ವರ .
  • “ ಅಪರಾಜಿತ ಶೈಲಿ”ಯು ಇವರ ಕಾಲಕ್ಕೆ ಸೇರಿದ್ದು - ಕಂಚಿಯ ಪಲ್ಲವರು .
  • “ ದೇವಗಂಗೆಯ ಭೂಸ್ಪರ್ಷ ಅಥವಾ ಗಂಗವಾತರಣ ” ಶಿಲ್ಪ ಿರುವ ಪ್ರದೇಶ - ಮಹಾಬಲಿಪುರಂ .
  • “ ಚಿತ್ತಾಕ್ಕಾರಪುಳಿ ” ಎಂಬ ಬಿರುದುಳ್ಳ ಕಂಚಿಯ ಪಲ್ಲವ ಅರಸ - 1 ನೇ ಮಹೇಂದ್ರ ವರ್ಮನ್ .
  • ಪಲ್ಲವ ಪದದ ಅರ್ಥ - ಬಳ್ಳಿ .
  • “ ಪಲ್ಲವರ ನಾಡು ” ಪದದ ಅರ್ಥ - ( ತಮಿಳಿನಲ್ಲಿ ) - ತಗ್ಗು ಪ್ರದೇಶ.
  • ಪಲ್ಲವರು ಎಂದರೇ - ತಗ್ಗು ಪ್ರದೇಶದ ಜನರು ಎಂದರ್ಥ.
  • ಮಹಿಪವೊಲು ತಾಮ್ರ ಶಾಸನದ ಕರ್ತೃ - ಶಿವಸ್ಕಂದ ವರ್ಮ.
  • ವಾಯಲೂರು ಸ್ತಂಭ ಶಾಸನದ ಕರ್ತೃ - ರಾಜ ಸಿಂಹ.
  • ಐಹೊಳೆ ಶಾಸನದ ಕರ್ತೃ - ರವಿಕೀರ್ತಿ.
  • ಕುಡಿಯ ಮಲೈ ಶಾಸನದ ಕರ್ತೃ - ಮಹೇಂದ್ರ ವರ್ಮ.
  • “ ಮತ್ತವಿಲಾಸ ಪ್ರಹಸನದ ” ಕೃತಿಯ ಕರ್ತೃ - ಮಹೇಂದ್ರ ವರ್ಮ.

ಕಂಚಿಯ ಪಲ್ಲವರ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Kanchi Pallava Dynasty in Kannada: ಪಲ್ಲವರ ಮೂಲ

  • a. ಪಾರ್ಥಿಯನ್ ಮೂಲ
  • b.ವಾಕಾಟಕರ ಮೂಲ
  • c. ಆಂದ್ರದ ಮೂಲ
  • d. ಪುಲಿಂದರ ಮೂಲ
  • e. ಸ್ಥಳೀಯ ಮೂಲ


ಕಂಚಿಯ ಪಲ್ಲವರ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Kanchi Pallava Dynasty in Kannada: ಪಲ್ಲವರ ರಾಜಕೀಯ ಇತಿಹಾಸ

  • ಪಲ್ಲವರ ಸ್ಥಾಪಕ - ಬಬ್ಬು.
  • ಪಲ್ಲವರ ಶಿವಸ್ಕಂದ ವರ್ಮ - ಮೊದಲ ಅರಸ.
  • ಪಲ್ಲವರ ಪ್ರಸಿದ್ದ ದೊರೆ - ಶಿವ ಸ್ಕಂದ ವರ್ಮ.
  • “ ಧರ್ಮ ಮಹಾ ರಾಜಾ ” ಎಂಬ ಬಿರುದನ್ನು ಹೊಂದಿದ್ದ ಪಲ್ಲವ ದೊರೆ - ಶಿವಸ್ಕಂದ ವರ್ಮ.
  • ಬುದ್ದ ವರ್ಮ - ಶಿವ ಸ್ಕಂದ ವರ್ಮನ ನಂತರ ಅಧಿಕಾರಕ್ಕೆ ಬಂದವನು .ನಂತರದ ಅರಸರು 1 ನೇ ನರಸಿಂಹ ವರ್ಮನ್ , 2 ನೇ ಸ್ಕಂದ ವರ್ಮನ್ , ವಿಷ್ಣು ಗೋಪ , ಮೂರನೇ ಸ್ಕಂದ ವರ್ಮನ್.
  • ಕಂಚಿಯ ಪಲ್ಲವ ದೊರೆ ವಿಷ್ಣು ಗೋಪನನ್ನು ಸೋಲಿಸಿದ ಗುಪ್ತದೊರೆ - ಸಮುದ್ರ ಗುಪ್ತ .
  • ಪಲ್ಲವ ಸಂತತಿಯಲ್ಲಿ ಅತ್ಯಂತ ಪ್ರಸಿದ್ದ ದೊರೆ - ಒಂದನೇ ಮಹೇಂದ್ರ ಮರ್ಮನ್ .

  • ಇಮ್ಮಡಿ ಪುಲಿಕೇಶಿ ಸಮಕಾಲಿನ ದೊರೆ .- ಒಂದನೇ ಮಹೇಂದ್ರ ಮರ್ಮನ್.
  • ಎರಡನೇ ಪುಲಿಕೇಶಿಯೊಡನೆ ಯುದ್ದ ಮಾಡಿದ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್.
  • ಮತ್ತ ವಿಲಾಸ , ವಿಚಿತ್ರ ಚಿತ್ತ , ಪರಮೇಶ್ವರ , ಚಿತ್ರಕಾರಪಲಿ , ಚೈತ್ಯಕಾರ ಗುಣಭಾರ , ಮುಂತಾದ ಬಿರುದುಳ್ಳ ಪಲ್ಲವ ಅರಸ - ಒಂದನೇ ಮಹೇಂದ್ರ ಮರ್ಮನ್.
  • ಕಲಹ ಪ್ರೀಯ ಎಂದು ಕರೆಯಲ್ಪಡುವ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್ .
  • ಸಂಸ್ಕೃತದಲ್ಲಿ ಭಗವದಚ್ಚುಕ ಕೃತಿಯ ಕರ್ತೃ - ಒಂದನೇ ಮಹೇಂದ್ರ ಮರ್ಮನ್ .
  • ಒಂದನೇ ಮಹೇಂದ್ರ ಮರ್ಮನ್ ಸಂಗೀತದ ಗುರುಗಳ - ರುದ್ರಾಚಾರ್ಯ.
  • ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ - ಒಂದನೇ ಮಹೇಂದ್ರ ಮರ್ಮನ್ . “ಕುಡಿಮಿಯಾ ಮಲೈ ಶಾಸನ .”
  • ಚೆಟ್ಟಿಕಾರಿ ಎಂದರೆ - ದೇಗುಲಗಳ ನಿರ್ಮಾಪಕ ಎಂದರ್ಥ.
  • ಚೆಟ್ಟಿ ಕಾರಿ ಎಂಬ ಹೆಸರನ್ನು ಹೊಂದಿದ್ದ ಪಲ್ಲವ ದೊರೆ - ಒಂದನೇ ಮಹೇಂದ್ರ ಮರ್ಮನ್.
  • “ಚಿತ್ರಜೀಕತಕಾಟ ” ಕೆರೆಯ ನಿರ್ಮಾತೃ - ಒಂದನೇ ಮಹೇಂದ್ರ ಮರ್ಮನ್.
  • ಈ ಕೆರೆಯು ಯಾವ ಊರಿನಲ್ಲಿ ನಿರ್ಮಿಸಲಾಗಿದೆ - ಮಾಮಂದೂರ್.
  • ‘ವಾತಾಪಿ ಕೊಂಡ ಹಾಗೂ ಮಹಾಮಲ್ಲ ’ ಎಂಬ ಬಿರುದನ್ನು ಹೊಂದಿದ್ದ ಪಲ್ಲವ ಅರಸ - ಒಂದನೇ ಮಹೇಂದ್ರ ಮರ್ಮನ್.
  • ಒಂದನೇ ನರಸಿಂಹ ವರ್ಮನ ಕಾಲದಲ್ಲಿ ಕಂಚಿಗೆ ಬೇಟಿ ನೀಡದ ಚೀನಿಯಾತ್ರಿಕ - ಹ್ಯೂಯನ್ ತ್ಸಾಂಗ್ ,
  • ಒಂದನೇ ನರಸಿಂಹ ವರ್ಮನ ಸೇನಾ ನಾಯಕ - ಸಿರೋತೃಂಡ ಅಥವಾ ಶಿರೋತ್ತುಂಡ ನಾಯನಾರ್ .
  • ಪುಲಿಕೇಶಿಯನ್ನು ಬಗ್ಗು ಬಡಿದ ಪಲ್ಲವ ಅರಸ - ಒಂದನೇ ನರಸಿಂಹ ವರ್ಮನ.
  • ಪುಲಿಕೇಶಿಯ ವಿರುದ್ದ ಜಯಗಳಿಸಿ ಒಂದನೇ ನರಸಿಂಹ ವರ್ಮನ ಧರಿಸಿದ ಬಿರುದು - ವಾತಾಪಿಕೊಂಡ .
  • ಪಲ್ಲವ ಅರಸ ಒಂದನೇ ನರಸಿಂಹ ವರ್ಮನ ನೊಂದಿಗೆ ಹೋರಾಡಿದ ಸಿಂಹಳದ ದೊರೆ - ಮಾನವವರ್ಮ .
  • ಒಂದನೇ ನರಸಿಂಹ ವರ್ಮನ ಎರಡನೇ ರಾಜಧಾನಿ - ಮಹಾಬಲಿಪುರಂ .
  • ಧರ್ಮರಾಜ ರಥವನ್ನು ಕೆತ್ತಿಸಿದ ಪಲ್ಲವ ದೊರೆ - ಒಂದನೇ ನರಸಿಂಹ ವರ್ಮನ .
  • ಪಲ್ಲವರ ಕೊನೆಯ ದೊರೆ - ಅಪರಾಜಿತ ವರ್ಮ .

  • ಪಲ್ಲವರ ಆಡಳಿತ ಈ ರಾಜರ ಆಡಳಿತವನ್ನು ಹೋಲುತ್ತಿತ್ತು - ಶಾತವಾಹನರು .
  • ಪಲ್ಲವರು ರಾಜನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮಹಾರಾಜ ಹಾಗೂ ಧರ್ಮ ಮಹಾರಾಜ .
  • ಪಲ್ಲವರು ಪ್ರಾಂತ್ಯಗಳನ್ನು - ನಾಡುಗಲಾಗಿ ವಿಂಗಡಿಸಿದರು .
  • ಪ್ರಾಂತ್ಯಗಳನನ್ನ - ಜಿಲ್ಲೆ ಅಥವಾ ಕೊಟ್ಟಂಗಳಾಗಿ ವಿಂಗಡಿಸಲಾಗಿತ್ತು .
  • ಕೊಟ್ಟಂಗಳನ್ನು - ಸ್ಥಳೀಯ ಸ್ವಾಯತ್ತ ಸಂಸ್ಥೆಗಳಾಗಿ ವಿಂಗಡಿಿದರು .
  • ಕೊಟ್ಟಂನ ಆಡಳಿತಾಧಿಕಾರಿಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ದೇಶಾಟಿಕ .
  • ಆಡಳಿತದ ಚಿಕ್ಕ ಘಟಕ - ಗ್ರಾಮವಾಗಿತ್ತು .
  • ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದವನು - ಗ್ರಾಮ ಬೋಜ .
  • ಗ್ರಾಮ ಸಭೆಯ ಸದಸ್ಯರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೆರುಮಾಳ್ .
  • ಪಲ್ಲವರ ಕಾಲದ ನ್ಯಾಯದಾನ ವ್ಯವಸ್ಥೆಯ ಮುಖ್ಯಸ್ಥ - ರಾಜ .
  • ಗ್ರಾಮಾಂತರ ಪ್ರದೇಶಗಳಲ್ಲಿ ನ್ಯಾಯದಾನ ಮಾಡುತ್ತಿದ್ದ ಸಮಿತಿಗಳು - ಮರಿಯ ಸಮಿತಿ .
  • ಪಲ್ಲವರ ಕಾಲದಲ್ಲಿ ನದಿಯ ಕಾಲುವೆಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅರಕ್ಕುಳ್ .
  • ಪಲ್ಲವರ ಕಾಲದ ಪ್ರಮುಖ ಬಂದರುಗಳು - ಮಹಾಬಲಿ ಪುರಂ ಹಾಗೂ ನಾಗಾಪಟ್ಟಣಂ .
  • ಕಂಚಿಯ ಪಲ್ಲವರ ಕಾಲದ ಶಿಕ್ಷಣ ಕೇಂದ್ರಗಳು - ಮಠಗಳು .
  • ಶಿಕ್ಷಣ ನೀಡುವ ಕೇಂದ್ರಗಳಿಗೆ ಈ ಹೆಸರಿನಿಂದ ಕರೆಯುತ್ತಿದ್ದರು - ಘಟಕಗಳು .
  • ತಮಿಳು ಸಾಹಿತ್ಯ ಬೆಳವಣಿಗೆಯ ದ್ವೀತಿಯ ಹಂತ - ಪಲ್ಲವರ ಕಾಲ .
  • “ ಕಾವ್ಯದರ್ಶ ಹಾಗೂ ಅವಂತಿ ಸುಂದರ ಕಥಾ” ಕೃತಿಯ ಕರ್ತೃ - ದಂಡಿ .
  • ತಿರುಮಂದಿರಂ ಕೃತಿಯ ಕರ್ತೃ - ಮಾಮುಲರ್ .
  • “ ನನ್ಮುಖ ತಿರುವಂದಾಡಿ ಮತ್ತು ತಿರುಚ್ಚಂದ್ರ ವಿರುತ್ತನ್ ” ಎಂಬ ಕೃತಿಯ ಕರ್ತೃ - ತಿರುಮಲೇಶೈ .
  • ಮಹಾ ಭಾರತವನ್ನು ತಮಿಳು ಭಾಷೆಗೆ ತ್ರಜುಮೆ ಮಾಡಿದ ಕವಿ - ಪೆರುಂದೇವನಾರ್ .
  • ನಾಚಿಯಾರ್ ತಿರುಮಮಾಲಿ ಮತ್ತು ತಿರು ಪ್ಪಾವೈ ಕೃತಿಯ ಕರ್ತೃ - ಆಂಡಾಳ್ .
  • ಒಂದನೇ ಮಹೇಂದ್ರ ವರ್ಮನ ಕಾಲದಲ್ಲಿ ದಕ್ಷಿಣ ಭಾರತದ ಶಿಲ್ಪ ಕಲೆಗಳಿಗೆ ಹಾಗೂ ಮೂರ್ತಿ ಶಿಲ್ಪ ಕಲೆಯ ಉಗಮಸ್ಥಾನ - ಮಹಾಬಲಿಪುರಂ .
  • ಮಹಾಬಲಿಪುರಂ ಶಿಲಾ ರಥಗಳು ಈ ಹೆಸರಿನಿಂದ ಪ್ರಸಿದ್ದಿಯಾಗಿದೆ - ಸಪ್ತ ಪಗೋಡ ,
  • ಪಲ್ಲವರ ರಾಜ್ಯ ಲಾಂಛನ - ಸಿಂಹ .
  • “ ಮಹಾಮಲ್ಲ ” ಎಂಬ ಬಿರುದ್ದನ್ನು ಹೊಂದಿದ್ದ ಪಲ್ಲವ ದೊರೆಯ ಹೆಸರು - ಒಂದನೇ ನರಸಿಂಹ ವರ್ಮನ.
  • ಪಲ್ಲವರ ಕಾಲದ ಪ್ರಸಿದ್ದ ಕಲಾ ಕೃತಿಗಳ ಕೇಂದ್ರ - ಮಹಾಬಲಿಪುರಂ ಹಾಗೂ ಕಂಚಿ .
  • ದಶಕುಮಾರ ಚರಿತ ಕೃತಿಯ ಕರ್ತೃ - ದಂಡಿ .
  • ಹ್ಯೂಯನ್ ತ್ಸಾಂಗನು ಪಲ್ಲವ ರಾಜ್ಯಕ್ಕೆ ಬೇಟಿ ನೀಡಿದ್ದು - ಕ್ರಿ.ಶ. 640 ರಲ್ಲಿ .ಪಲ್ಲವರ ರಾಜ್ಯವನ್ನು “ ದ್ರಾವಿಡ ದೇಶ ” ಎಂದು ಕರೆದವರು - ಹ್ಯೂಯನ್ ತ್ಸಾಂಗ್

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads