Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday 28 June 2022

ಅಧ್ಯಾಯ -2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Vistarane SSLC Social Science Question Answers

ಅಧ್ಯಾಯ -2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Vistarane SSLC Social Science Question Answers

ಅಧ್ಯಾಯ -2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Vistarane SSLC Social Science Question Answers



ಒಂದು ಅಂಕದ ಪ್ರಶೋತ್ತರಗಳು:

1➤ ಮೊದಲ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

2➤ ಸಹಾಯಕ ಸೈನ್ಯ ಪದ್ಧತಿಯನ್ನು ಯಾರು ಜಾರಿಗೆ ತಂದರು?

3➤ ಲಾರ್ಡ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಯಾವಾಗ ಜಾರಿಗೆ ತಂದನು?

4➤ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ ಯಾವುದು?

5➤ ಎರಡನೇ ಆಂಗ್ಲೋ-ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು?

6➤ ಸಿಖ್ಖರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ ಯಾವುದು?

7➤ “ದತ್ತು ಮಕ್ಕಳಿಗೆ ಹಕ್ಕಿಲ್ಲ” ಎಂಬ ನೀತಿಯನ್ನು ಜಾರಿಗೆ ತರಲಾದ ವರ್ಷ ಯಾವುದು?

8➤ “ದತ್ತು ಮಕ್ಕಳಿಗೆ ಹಕ್ಕಿಲ್ಲ” ಎಂಬ ನೀತಿಯನ್ನು ಯಾರು ಜಾರಿಗೆ ತಂದರು?

9➤ ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿ ಕೊಂಡವರು ಯಾರು?

10➤ ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ರಾಜ್ಯಗಳಾವುವು?

11➤ ಲಾರ್ಡ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣವೇನು?

12➤ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗೆ ಒಳಪಟ್ಟ ರಾಜ್ಯಗಳಾವುವು?

13➤ ಪಂಜಾಬಿನ ಮೇಲೆ ಬ್ರಿಟಿಷರು ನೇರ ಆಳ್ವಿಕೆಯನ್ನು ಹೇರಲು ಹೋರಟಾಗ ಪ್ರತಿಭಟಿಸಿದವರು ಯಾರು ?

14➤ ಡಾಲ್ ಹೌಸಿಯು ತನ್ನ ವಿಸ್ತರಣಾ ನೀತಿಯನ್ನು ಯಾವ ನೀತಿಯ ಮೂಲಕ ಸಾಧಿಸಿದನು?

15➤ ಬ್ರಿಟಿಷರು ಭಾರತದಲ್ಲಿ ರಾಜಕೀಯ ಅಸ್ತ್ರವಾಗಿ ಜಾರಿಗೊಳಿಸಿದ ನೀತಿ ಯಾವುದು?

ಆಂಗ್ಲೋ-ಮರಾಠಾ ಯುದ್ಧಗಳು
ಕ್ರ.ಸಂ ಯುದ್ಧಗಳು ವರ್ಷ ಒಪ್ಪಂದ
1 ಮೊದಲನೆಯ ಆಂಗ್ಲೋ-ಮರಾಠಾ ಯುದ್ಧ 1775-1782 ಸಾಲಬಾಯ್ ಒಪ್ಪಂದ
2 ಎರಡನೆಯ ಆಂಗ್ಲೋ ಮರಾಠಾ ಯುದ್ಧ 1803-1805 ಬೆಸ್ಸಿನ್ ಒಪ್ಪಂದ
3 ಮೂರನೆಯ ಆಂಗ್ಲೋ ಮರಾಠಾ ಯುದ್ಧ 1817-18 -
ಇಂಗ್ಲೀಷರ ಪ್ರಮುಖ ನೀತಿಗಳು
ಕ್ರ.ಸಂ ನೀತಿಗಳು ವರ್ಷ ವ್ಯಕ್ತಿಗಳು
1 ಸಹಾಯಕ ಸೈನ್ಯ ಪದ್ಧತಿ 1798 ಲಾರ್ಡ ವೆಲ್ಲಸ್ಲಿ
2 ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ 1848 ಲಾರ್ಡ ಡಾಲ್ ಹೌಸಿ



II. ಎರಡು ಅಂಕದ ಪ್ರಶೋತ್ತರಗಳು.


1. ಭಾರತೀಯ ರಾಜ್ಯಗಳನ್ನು ಉಪಾಯವಾಗಿ ಕಬಳಿಸಿದ ಬ್ರಿಟಿಷರ ಎರಡು ನೀತಿಗಳಾವುವು?

ಉತ್ತರ:-
  1. ಸಹಾಯಕ ಸೈನ್ಯ ಪದ್ಧತಿ
  2. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ

2. ಸಹಾಯಕ ಸೈನ್ಯ ಪದ್ಧತಿಯ ನಿಭಂದನೆಗಳಾವುವು?

  • ಸಹಾಯಕ ಸೈನ್ಯ ಪದ್ಧತಿ ಎಂಬ ನೀತಿಯನ್ನು ಲಾರ್ಡ ವೆಲ್ಲೆಸ್ಲಿಯು 1798ರಲ್ಲಿ ಜಾರಿಗೆ ತಂದನು.
  • ಈ ಒಪ್ಪಂದಕ್ಕೆ ಒಳಗಾದ ರಾಜರು ಬ್ರಿಟಿಷ್ ಸೈನ್ಯದ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕಾಗಿತ್ತು
  • ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟನನ್ನು ನೇಮಿಸಿಕೊಳ್ಳಬೇಕಾಗಿತ್ತು.
  • ಬ್ರಿಟಿಷರ ಅನುಮತಿ ಇಲ್ಲದೇ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನುರನ್ನು ನೇಮಿಸಿಕೊಳ್ಳವಂತಿರಲಿಲ್ಲ
  • ಸೈನ್ಯದ ವೆಚ್ಚವನ್ನು ದೇಶಿಯ ರಾಜರೇ ನೋಡಿಕೊಳ್ಳಬೇಕಾಗಿತ್ತು
  • ಭಾರತೀಯ ರಾಜರು ಯುದ್ಧ ಅಥವಾ ಸಂಧಾನ ಮಾಡಿಕೊಳ್ಳುವುದಕ್ಕೆ ಗವರ್ನರ್ ಜನರಲ್ ಅನುಮತಿ ಬೇಕಿತ್ತು.
  • ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುತ್ತಿತ್ತು.
  • ದೇಶಿಯ ರಾಜ್ಯರು ಯುದ್ಧ ಮತ್ತು ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ ಜನರಲ್ ಅನುಮತಿ ಪಡೆಯಬೇಕಾಗಿತ್ತು

3. ಬ್ರಿಟಿಷರ ಅಧಿಕಾರ ವಿಸ್ತರಣೆಯಲ್ಲಿ “ದತ್ತು ಮಕ್ಕಳಿಗೆ ಹಕ್ಕಿಲ್ಲ” ಎಂಬ ನೀತಿ ಹೇಗೆ ಸಹಕಾರಿಯಾಯಿತು?

  • ಲಾರ್ಡ ಡಾಲ್ ಹೌಸಿ 1848 ರಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದನು.
  • ಈ ನೀತಿಯ ಪ್ರಕಾರ “ಭಾರತೀಯ ರಾಜರು ಮಕ್ಕಳಿಲ್ಲದೇ ಮೃತರಾದರೆ ಅವರು ದತ್ತು ತೆಗೆದುಕೊಂಡಿದ್ದ ಪುತ್ರರರಿಗೆ ಉತ್ತಾರಾಧಿಕಾರತ್ವದ ಹಕ್ಕಿರಲಿಲ್ಲ”
  • ಇಂತಹ ರಾಜ್ಯಗಳು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳಲಾಗುತ್ತಿತ್ತು.
  • ಈ ನೀತಿಗೆ ಒಳಪಟ್ಟ ರಾಜ್ಯಗಳೆಂದರೆ-ಸತಾರಾ, ಜೈಪುರ, ಸಂಬಲಪುರ್, ಉದಯಪುರ, ಝಾನ್ಸಿ, ನಾಗಪುರ.

4. ಮೊದಲ ಆಂಗ್ಲೋ-ಮರಾಠ ಯುದ್ಧಕ್ಕೆ ಕಾರಣಗಳೇನು?

  • ಮರಾಠರ ಬಲಿಷ್ಠ ಪೇಳ್ವೆ ಮಾಧವರಾವ್‌ನ ಮರಣದ ನಂತರ ಅವನ ತಮ್ಮ ನಾರಾಯಣರಾಯನು ಪೇಳ್ವೆ ಸ್ಥಾನಕ್ಕೆ ಬಂದನು
  • ಆದರೆ ರಘುನಾಥರಾಯನಿಂದ ಪೇಳ್ವೆ ನಾರಾಯಣರಾಯನ ಕೊಲೆಯಾಯಿತು.
  • ಪೇಶ್ವೆ ಸ್ಥಾನದ ಕಲಹದಲ್ಲಿ ನಾನಾ ಫಡ್ನವೀಸ್‌ನ ನೇತೃತ್ವದಲ್ಲಿ ನಾರಾಯಣರಾಯನ ಮಗ ಎರಡನೇ ಮಾಧವರಾವನಿಗೆ ಮರಾಠರು ಪಟ್ಟಕಟ್ಟಿದರು.
  • ರಘೋಬನು ಬ್ರಿಟಿಷರ ಬೆಂಬಲವನ್ನು ಕೊರಿದನು.
  • ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು.
  • ಬ್ರಿಟಿಷರ ಮತ್ತು ಮರಾಠರ ನಡುವೆ ಯುದ್ಧ ನಡೆದು ಕೊನೆಗೆ ಸಾಲ್‌ಬಾಯ್ ಒಪ್ಪಂದದೊಂದಿಗೆ ಕೊನೆಗೊಂಡಿತು

5. ಎರಡನೇ ಆಂಗ್ಲೋ-ಮರಾಠಾ ಯುದ್ಧವನ್ನು ವಿವರಿಸಿರಿ?

  • ಮರಾಠರ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಈ ಯುದ್ಧಕ್ಕೆ ಕಾರಣ.
  • ಹೋಳ್ಕರ ಮನೆತನದ ಯಶವಂತರಾವ ಒಂದು ಕಡೆಯಾದರೆ ಸಿಂಧಿಯಾ ಮನೆತನದ ದೌಲತ್‌ರಾವ ಹಾಗೂ ಪೇಶ್ವೆ ಎರಡನೇ ಬಾಜಿರಾವ ಇನ್ನಂದು ಕಡೆಗಿದ್ದರು.
  • ಹೋಳ್ಕರ್‌ ಸೈನ್ಯವು ಸಿಂಧಿಯಾ ಮತ್ತು ಪೇಶ್ವೆಗಳ ಸೈನ್ಯವನ್ನು ಸೋಲಿಸಿತು. ಪೇಳ್ವೆ ಬ್ರಿಟಿಷರ ಸಹಾಯ ಯಾಚಿಸಿದನು
  • ಇದು ಲಾರ್ಡ ವೆಲ್ಲೆಸ್ಲಿಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ದೊರೆಯಿತು.
  • ಪೇಶ್ವೆ ಯು “ಬಸ್ಸಿನ್ ಒಪ್ಪಂದಕ್ಕೆ” ಸಹಿ ಹಾಕುವ ಮೂಲಕ ಸಹಾಯಕ ಸೈನ್ಯಪದ್ಧತಿಯನ್ನು ಒಪ್ಪಿದನು.
  • ಈ ಒಪ್ಪಂದವನ್ನು ಅನೇಕ ಮರಾಠ ನಾಯಕರು ವಿರೋಧಿಸಿದರು.
  • ಎಲ್ಲಾ ನಾಯಕರನ್ನು ಲಾರ್ಡ ವೆಲ್ಲೆಸ್ಲಿ ಅನೇಕ ಯುದ್ಧಗಳಲ್ಲಿ ಸೋಲಿಸಿದನು.

6. ಮೂರನೇ ಆಂಗ್ಲೋ-ಮರಾಠಾ ಯುದ್ಧವನ್ನು ವಿವರಿಸಿರಿ?

  • ಮರಾಠರ ಮನೆತನಗಳು ತಮ್ಮ ಘನತೆ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದವು.
  • ಮರಾಠರ ಪೇಶ್ವ ಕೂಡಾ ಬ್ರಿಟಿಷ್‌ ನಿಯಂತ್ರಣದಿಂದ ಪಾರಲಾಗಲು ಹವಣಿಸುತ್ತಿದ್ದನು.
  • ಪೇಶ್ವೆ ಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು.
  • ನಾಗಪುರದ ಅಪ್ಪಾಸಾಹೇಬ & ಮಲ್ದಾರರಾವ ಹೋಳ್ಕರ ಕೂಡಾ ಬ್ರಿಟಿಷರ ವಿರುದ್ಧ ದಂಗೆ ಎದ್ದು ಬ್ರಿಟಿಷರ ಕೈಯಲ್ಲಿ ಸೋತರು.
  • ಎರಡನೇ ಬಾಜೀರಾವನು ಬ್ರಿಟಿಷರ ವಿರುದ್ಧ ಕೋರೆಗಾವ್ ಮತ್ತು ಅಪ್ಪಿ ಯುದ್ಧದಲ್ಲಿ ಸೋತು ಶರಣಾದನು
  • ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿ ಬಾಜೀರಾಯನಿಗೆ ವಿಶ್ರಾಂತಿ ವೇತನ ನೀಡಿದರು.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads