Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday 27 February 2022

ಮಕ್ಕಳ ಮೇಲಿರುವ ಪಾಲಕರ ಒತ್ತಡಗಳು

ಮಕ್ಕಳ ಮೇಲಿರುವ ಪಾಲಕರ ಒತ್ತಡಗಳು

ಕನ್ನಡ ಕಥೆಗಳು,ಕನ್ನಡ ನೀತಿ ಕಥೆಗಳು,ಕನ್ನಡ ಸಣ್ಣ ಕಥೆಗಳು,

ಆತ್ಮೀಯ ಸ್ನೇಹಿತರೇ, ಇದು ಸ್ಪರ್ಧಾತ್ಮಕ ಯುಗ ಎಂಬುದು ಎಲ್ಲರಿಗೂ ತಿಳಿದಿರವ ವಿಚಾರವೇ ಆದಾಗ್ಯೂ ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ತಂದೆ ತಾಯಂದಿರು ಪಾಲಕರು ಹಾಗೂ ಪೋಷಕರು ಪುಟ್ಟ ಮಕ್ಕಳ ಮೇಲೆ ಇರಲಾರದ ಒತ್ತಡಗಳನ್ನು ಹೇರಿ ಮಕ್ಕಳನ್ನು ಮಾನಸಿಕ ಕ್ಷೋಭೆಗೆ ತಳುತ್ತಿದ್ದಾರೆ. ಮಕ್ಕಳು ಯಾವ ವಯಸ್ಸಿನಲ್ಲಿ ಹೇಗಿರಬೇಕು ಅವರುಗಳ ಕಾರ್ಯಗಳನ್ನು ವಯೋಮಿತಿ ಆಧರಿಸಿ ನೀಡುವಲ್ಲಿ ರಾಬರ್ಟ್ ಹ್ಯಾವಿಗ್ ಹಸ್ರ್ಟ್ ಅವರು “ವಿಕಾಸಾತ್ಮಕ ಕಾರ್ಯಗಳು” ಎಂಬ ಮನೋವಿಜ್ಞಾನದ ಪರಿಕಲ್ಪನೆಗಳಲ್ಲಿ ಬಹಳ ವಿಸ್ತಾರವಾಗಿ ವಿವರಿಸದ್ದಾರೆ.

ವಿಕಾಸಾತ್ಮಕ ಕಾರ್ಯಗಳು ಮಗುವಿನ ವಯೋಮಿತಿಯನ್ನು ಆಧರಿಸಿ, ಯಾವ ವಯಸ್ಸಿನ ಮಗುವು ಯಾವ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ವಿಸ್ತಾರವಾಗಿ ಹೇಳಿದ್ದಾರೆ. ಇವತ್ತಿನ ತಂದೆ ತಾಯಂದಿರು ತಮ್ಮ ಮಕ್ಕಳ ಮೇಲೆ ತರುವ ಒತ್ತಡಗಳನ್ನು ಅವರನ್ನು ಹೇಗೆ ಕಷ್ಟಕ್ಕೆ ಸಿಲುಕಿಸುತ್ತವೆ ಎಂಬುದನ್ನು ಮೋಟಿವೇಷನಲ್ ಸ್ಪೀಕರ್ ಸಂದೀಪ್ ಮಹೇಶ್ವರಿ ಅವರು ಒಂದು ಸುಂದರವಾದ ಕಥೆಯ ಮೂಲಕ ತಿಳಿಸಿದ್ದಾರೆ. ಆ ಸುಂದರವಾದ ಕಥೆಯನ್ನು ಈ ಕೆಳಗೆ ನೀಡಲಾಗಿದೆ.

ಒಂದು ದಿನ ಅಪ್ಪ-ಮಗ ಎಲ್ಲೋ ಹೋಗುತ್ತಿರುತ್ತಾರೆ. ದಾರಿಯಲ್ಲಿ ಒಂದಿಷ್ಟು ಮಕ್ಕಳು ಕೆಸರಿನಲ್ಲಿ ಏನೋ ಹುಡುಕುತ್ತಿರುವುದು ಗೊತ್ತಾಗುತ್ತದೆ. ಅಪ್ಪ ಅವರ ಹತ್ತಿರ ಹೋಗಿ ಏನಾಗುತ್ತಿದೆ ಎಂದು ಕೇಳುತ್ತಾರೆ. ಅದಕ್ಕೊಬ್ಬ ಹುಡುಗ, ಆ ಕೆಸರಿನಲ್ಲಿ ಒಂದು ಚಿನ್ನದ ಹಣ್ಣಿದೆ, ಅದನ್ನು ಕೀಳುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾನೆ. ಆ ಹಣ್ಣು ತನ್ನ ಮಗನಿಗೆ ಸಿಕ್ಕರೆ, ಅದನ್ನು ಮಾರಿ ಸಾಕಷ್ಟು ಹಣ ಸಂಪಾದಿಸಬಹುದು ಎಂದು ಯೋಚಿಸುತ್ತಾನೆ. ಮಗನಿಗೆ ಆ ಹಣ್ಣು ತರುವುದಕ್ಕೆ ಹೇಳುತ್ತಾನೆ. ಮಗನಿಗೆ ಇಷ್ಟವಿಲ್ಲದಿದ್ದರೂ ಅವನನ್ನು ಕೆಸರತ್ತ ನೂಕುತ್ತಾನೆ. ಕೆಸರಿಗೆ ಸಿಕ್ಕು ಅಪ್ಪನ ಕಣ್ಣೆದುರೇ ಆತ ಸಾಯುತ್ತಾನೆ.

ಅಲ್ಲೇ ರೋಧಿಸುತ್ತ ಕುಳಿತಿದ್ದಾಗ ಮಾತಾಡಿಸಲು ಬರುವ ಸಾಧು ಜತೆಗೆ ನಡೆದಿದ್ದೆಲ್ಲ ಹೇಳುತ್ತಾನೆ. ಆಗ ಸಾಧು, ಕೆಸರಲ್ಲಿ ಹಣ್ಣಿಲ್ಲ, ಅಪ್ಪ ನೋಡಿದ್ದು ಮರದ ಮೇಲಿರುವ ಹಣ್ಣಿನ ಪ್ರತಿಫಲನ ಎಂದು ಗಮನಕ್ಕೆ ತರುತ್ತಾನೆ. ಮಗನನ್ನು ಕೆಸರಿಗೆ ನೂಕುವ ಬದಲು, ಒಂದು ನಿಮಿಷ ಅವನನ್ನೇ ಕೇಳಿದ್ದರೆ, ಅವನು ನಿಜವಾದ ಚಿನ್ನದ ಹಣ್ಣನ್ನು ತರುವ ಸಾಧ್ಯತೆ ಇತ್ತು ಎನ್ನುತ್ತಾನೆ. ಆಗ ಅಪ್ಪನಿಗೆ ಜ್ಞಾನೋದಯವಾಗುತ್ತದೆ. ಇದರ ಸಾರಾಂಶ ಇಷ್ಟೇ. ತಂದೆ-ತಾಯಿ ತಮ್ಮ ಮಕ್ಕಳ ಮೇಲೆ ಅಪಾರ ಕನಸುಗಳನ್ನಿಟ್ಟುಕೊಂಡು ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮಕ್ಕಳು ಆ ಒತ್ತಡಗಳನ್ನು ತಡೆದುಕೊಳ್ಳದೆ, ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಿದ್ದಾರೆ. ಹೀಗಾಗಿ ಮಕ್ಕಳ ಮೇಲೆ ಒತ್ತಡ ಹಾಕದೆ, ಅವರಿಗೆ ತಮ್ಮ ಕನಸಿನ ಜೀವನವನ್ನು ನಡೆಸುವುದಕ್ಕೆ ಅವಕಾಶ ಮಾಡಿಕೊಡಿ.

ಆತ್ಮೀಯ ಪಾಲಕರೇ, ಕಥೆಯ ಮೂಲಕ ನಾವುಗಳು ತಿಳಿದುಕೊಳ್ಳುವ ನೀತಿ ಪಾಠ ಇಷ್ಟೇ, ಮಕ್ಕಳು ಅಮೂಲ್ಯ ರತ್ನಗಳು, ಮಕ್ಕಳನ್ನು ಅವರಿಷ್ಟದಂತೆ ಬಿಟ್ಟು ಬಿಡಿ, ಒತ್ತಾಯ ಪೂರ್ವಕವಾಗಿ ಅವರಿಗೆ ಇಷ್ಟವಿಲ್ಲದ ಕ್ಷೇತ್ರದಲ್ಲಿ ಅವರನ್ನು ನೂಕು ಅವರ ಮಾನಸಿಕ ನೆಮ್ಮದಿಯನ್ನು ಹಾಳು ಮಾಡದಿರಿ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads